ಕನಕಶ್ರೀ ರಾಷ್ಟ್ರೀಯ ಪ್ರಶಸ್ತಿಗೆ ಡಾ. ಎ.ಡಿ.ಕೊಟ್ನಾಳ ಆಯ್ಕೆ


ಬೆಂಗಳೂರು: ಫಾರೆಸ್ಟ್ ಕಾಲೊನಿ ನಿವಾಸಿಯಾಗಿರುವ ಡಾ. ಎ.ಡಿ. ಕೊಟ್ನಾಳ ಇವರಿಗೆ ಅಕ್ಷರ ದೀಪ ಪ್ರಕಾಶನ ಗದಗ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ಇವರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಕನಕೋತ್ಸವ 2025 ರ ಪ್ರಯುಕ್ತ, ಇವರ ಬಹುಮುಖ ಸೇವೆಯನ್ನು ಗುರುತಿಸಿ "ಕನಕಶ್ರೀ ರಾಷ್ಟ್ರೀಯ ಪ್ರಶಸ್ತಿಗೆ" ಆಯ್ಕೆ ಮಾಡಿದ್ದಾರೆ, 

ಕಲೆ ಸಾಹಿತ್ಯ ಹಾಗೂ ಸಂಸ್ಕೃತಿಯ ಬಗ್ಗೆ ಅಪಾರ ಅಭಿಮಾನ ಬೆಳೆಸಿಕೊಂಡವರು ಜೊತೆಗೆ ಸಮಾಜ ಸೇವೆ ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳಲ್ಲಿ ತನ್ನ ಸೇವಾ ಕಾರ್ಯವನ್ನು ಮಾಡಿದವರು ಸಾಹಿತ್ಯಾಸಕ್ತರಾಗಿರುವ ಇವರು ಕೃಷಿ ಕ್ಷೇತ್ರದಲ್ಲೂ ಕಳೆದ 35 ವರ್ಷಗಳಿಂದ ರೈತ ಸಮುದಾಯದ ಅಭಿವೃಧಿಗೆ ಶ್ರಮಿಸುತ್ತಿದ್ದಾರೆ.


ಡಾ.ಕೊಟ್ನಾಳ ಇವರ ಬಹುಮುಖ ಸೇವೆಗೆ ವಿವಿಧ ಸಂಘ ಸಂಸ್ಥೆಗಳು ನೀಡುವ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅಕ್ಷರ ದೀಪ ಪ್ರಕಾಶನ ಗದಗ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ಇವರು ಕೊಡಮಾಡುವ "ಕನಕಶ್ರೀ ರಾಷ್ಟ್ರೀಯ ಪ್ರಶಸ್ತಿ" ಯು ಇವರ ಅಪ್ರತಿಮ ಸಾಧನೆಗೆ ಸಂದ ಗೌರವವಾಗಿದೆ. 

09 ನವೆಂಬರ್ 2025 ರ ರವಿವಾರ ದಂದು ಧಾರವಾಡದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಆಯೋಜಿಸಿರುವ ಕನ್ನಡ ರಾಜ್ಯೋತ್ಸವ ಹಾಗೂ ಕನಕೋತ್ಸವ 2025 ಅದ್ದೂರಿ ಸಮಾರಂಭದಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡುತಾರೆಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ. 

ಈ ಸಮಾರಂಭದ ಅಧ್ಯಕ್ಷತೆ ಡಾ.ರಾಮಕೃಷ್ಣ ಶಿರೂರ (ಶಿಕ್ಷಕ ಸಾಹಿತಿಗಳು ಮೂಡಬಿದಿರೆ) ಅವರು ಮಾಡುತ್ತಾರೆ ಹಾಗೂ ಮುಖ್ಯ ಅತಿಥಿಗಳಾಗಿ ಶ್ರೀ ಮಲ್ಲಪ್ಪ ಶಿವಪ್ಪ ವಾಘಮೋರೆ, ಡಾ. ಪ್ರಮೀಳಾ ಎಸ್ ಪಾಟೀಲ್ ಮತ್ತು ಶ್ರೀಮತಿ ಶಿಲ್ಪಾ ವಿ ಆರ್ ಅವರು ನಡೆಸುತ್ತಾರೆ ಹಾಗೂ ಡಾ.ಲಿಂಗರಾಜ ಅಂಗಡಿ ಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ಮತ್ತು ಶ್ರೀ ಪ್ರವೀಣಕುಮಾರ ಕನ್ಯಾಳ (ಅಧ್ಯಕ್ಷರು ಅಕ್ಷರ ದೀಪ ಸಾಹಿತ್ಯ ವೇದಿಕೆ) ಮತ್ತು ಅನೇಕ ಗಣ್ಯರ ಉಪಸ್ತಿತಿಯಲ್ಲಿ ನಡೆಯುವುದೆಂದು ಆಯೋಜಕರು ತಿಳಿಸಿದಾರೆ. ಪ್ರಶಸ್ತಿಗೆ ಅಯ್ಕೆಯಾಗಿರುವ ಡಾ. ಎ.ಡಿ. ಕೊಟ್ನಾಳ ಅವರಿಗೆ ನಾಡಿನ ಅನೇಕ ಸಂಘ ಸಂಸ್ಥೆಗಳು ಮತ್ತು ಬಂಧು ಬಳಗದವರು, ಸ್ನೇಹಿತರು, ಗಣ್ಯಮಾನ್ಯರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.
Next Post Previous Post