ಪಾಣಾಜೆ ಸುಬೋಧ ಪ್ರೌಢಶಾಲೆಯಲ್ಲಿ 1997-98 ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮ


ಪಾಣಾಜೆ: ಪಾಣಾಜೆ ಸುಬೋಧ ಪ್ರೌಢಶಾಲೆಯ 1997-98 ನೇ ಸಾಲಿನ ಹತ್ತನೇ ತರಗತಿ ಹಿರಿಯ  ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮ ನೆನಪುಗಳ ಮೆರವಣಿಗೆ ಪಾಣಾಜೆ ವಿದ್ಯಾವರ್ಧಕ ಸಂಘದ  ಅಧ್ಯಕ್ಷರಾದ ಉಪೇಂದ್ರ ಬಲ್ಯಾಯ ದೇವಸ್ಯ ಇವರ ಅಧ್ಯಕ್ಷತೆಯಲ್ಲಿ ಶಾಲೆಯಲ್ಲಿ ಇತ್ತೀಚಿಗೆ ಜರಗಿತು. ದೇಶ ವಿದೇಶದ ನಾನಾ ಕಡೆಗಳಲ್ಲಿ ತಮ್ಮ ತಮ್ಮ ವೃತ್ತಿಗಳಲ್ಲಿ ನಿರತರಾಗಿರುವ ಹಿರಿಯ ವಿದ್ಯಾರ್ಥಿಗಳು ತಾವು  ವಿದ್ಯಾರ್ಜನೆ ಮಾಡಿದ ಶಾಲೆಯಲ್ಲಿ ಒಟ್ಟಿಗೆ ಸೇರಿ ತಮಗೆ ಬೋಧಿಸಿದ ಶಿಕ್ಷಕರ ಹಿತವಚನಗಳನ್ನು ಆಲಿಸಿ ಖುಷಿಪಟ್ಟರು. 


ಸಮಾರಂಭದ ಅಧ್ಯಕ್ಷರು, ಶಾಲಾ ಸಂಚಾಲಕರು ಹಾಗೂ ಶಿಕ್ಷಕರು ಜೊತೆಯಲ್ಲಿ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಗಲಿದ ತಮ್ಮ ಗುರುಗಳಿಗೆ ಮತ್ತು ಸಹಪಾಠಿಗಳಿಗೆ  ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ತಮ್ಮ ಗುರುಗಳಾದ ಪಿಲಿಂಗಲ್ಲು ಕೃಷ್ಣ ಭಟ್, ಮೊಳಕ್ಕಾಲು ಶ್ರೀಕೃಷ್ಣ ಭಟ್, ಸಿ. ಸುಬ್ರಹ್ಮಣ್ಯ ಶಾಸ್ತ್ರಿ, ಎಸ್ ಕೆ ನಾರಾಯಣ ಭಟ್, ಪುರಂದರ ಎಂ ಜಿ, ಶ್ರೀಮತಿ ನಿರ್ಮಲ ಕೆ, ಸದಾಶಿವ ಎಸ್ ವಿ, ಸಂಘದ ಅಧ್ಯಕ್ಷರಾದ ಉಪೇಂದ್ರ ಬಲ್ಯಾಯ, ಸಂಚಾಲಕ ಮಹಾಬಲೇಶ್ವರ ಭಟ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರವೀಂದ್ರ ಭಂಡಾರಿ ಹಾಗೂ ಈಗಿನ ಶಿಕ್ಷಕರಾದ ವಿನುತ ಕುಮಾರಿ ಬಿ, ಸುಧೀರ್ ಎಸ್ ಪಿ, ಕೀರ್ತಿ ಸುಬ್ರಹ್ಮಣ್ಯ ಹಾಗೂ ಖಜಾಂಜಿ  ಎ ಎನ್ ಕೊಳಂಬೆ ಅವರನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ಹಿರಿಯ ವಿದ್ಯಾರ್ಥಿಗಳು ಸನ್ಮಾನಿಸಿದರು.


 ಶಾಲಾ ಸಂಚಾಲಕರು ಪ್ರಕೃತ ಶಾಲೆಯ ಸ್ಥಿತಿಯನ್ನು ವಿವರಿಸಿ ಹಿರಿಯ ವಿದ್ಯಾರ್ಥಿಗಳ ಸಹಕಾರವನ್ನು ಕೋರಿದರು.


 ಹಿರಿಯ ವಿದ್ಯಾರ್ಥಿಗಳಾದ ರಾಜೇಶ್ ಎ ಆರ್, ಶ್ರೀಮತಿ ಜಯಂತಿ, ಸೀತಾರಾಮ ಭರಣ್ಯ ತಾವು ಶಾಲೆಯಲ್ಲಿ ಕಳೆದ ದಿನಗಳನ್ನು ನೆನಪಿಸಿಕೊಳ್ಳುತ್ತಾ 
 ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಬ್ಯಾಚಿನ ಎಲ್ಲಾ ವಿದ್ಯಾರ್ಥಿಗಳು ತಮ್ಮ ಗುರುಗಳಿಂದ ಹಾಗೂ ಆಡಳಿತ ಮಂಡಳಿ ಸದಸ್ಯರಿಂದ ನೆನಪಿನ ಕಾಣಿಕೆಗಳನ್ನು ಪಡೆದುಕೊಂಡರು. 




ಹಿರಿಯ ವಿದ್ಯಾರ್ಥಿನಿಯರು ತಾವು  ವಿದ್ಯಾರ್ಜನೆ ಮಾಡಿದ 10ನೇ ತರಗತಿ ಕೋಣೆಯಲ್ಲಿಯೇ ಕುಳಿತು  ಹರಟೆ ಹೊಡೆದು ಖುಷಿಪಟ್ಟರು. ಕಾರ್ಯಕ್ರಮಕ್ಕೆ ಸಹಕರಿಸಿದ ಬಿಬಿ ಕ್ರಿಯೇಷನ್ಸ್ ನ ಹರೀಶ್ ನೆಲ್ಲಿತ್ತಿಮಾರು, ಪ್ರದೀಪ್ ಪಾಣಾಜೆ ಹಾಗೂ ಮಾ.ಆನಘ ಅವರನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.


 ಶ್ರೀಮತಿ ಪ್ರವೀಣ ಪ್ರಾರ್ಥಿಸಿ, ಅಮೃತ್ ನಾರಾಯಣ ಪ್ರಾಸ್ತಾವಿಕ ನುಡಿಗಳೊಂದಿಗೆ  ಸ್ವಾಗತಿಸಿದರು. ಸೀತಾರಾಮ ಭರಣ್ಯ ಅವರು  ಕಾರ್ಯಕ್ರಮದ ರೂವಾರಿ ಜಯಕುಮಾರ್ ರೈ ಅವರ ಕಾರ್ಯವನ್ನು ಶ್ಲಾಘಿಸುತ್ತಾ ವಂದಿಸಿದರು. ಶ್ರೀಮತಿ ಅನ್ನಪೂರ್ಣ  ಎಸ್ ಆರ್ ಕಾರ್ಯಕ್ರಮವನ್ನು ನಿರೂಪಿಸಿದರು.
 

ಶಾಲೆಗೆ ರೂ 1,56,500=00  ದೇಣಿಗೆ ಹಸ್ತಾಂತರ 



 ಹಿರಿಯ ವಿದ್ಯಾರ್ಥಿಗಳಾದ ಜಯಕುಮಾರ್ ರೈ ಹಾಗೂ ಗಿರೀಶ್ ಭಟ್ ಬಾಳೆಮೂಲೆ ಅವರು ಈ ಬ್ಯಾಚಿನ ಹಿರಿಯ ವಿದ್ಯಾರ್ಥಿಗಳು  ಒಟ್ಟು ಸೇರಿ ಸಂಗ್ರಹಿಸಿದ ಮೊತ್ತವಾದ  ರೂ ಒಂದು ಲಕ್ಷದ 56 ಸಾವಿರದ 500 ರೂ ಗಳನ್ನು ಶಾಲಾಭಿವೃದ್ಧಿ ಕೆಲಸಗಳಿಗಾಗಿ ಸಂಘದ ಅಧ್ಯಕ್ಷರು ಹಾಗೂ ಶಾಲಾ ಸಂಚಾಲಕರಿಗೆ ದೇಣಿಗೆಯಾಗಿ ಹಸ್ತಾಂತರಿಸಿದರು. 

ಸಭಾ ಕಾರ್ಯಕ್ರಮದ ಬಳಿಕ ಸಹ ಭೋಜನ ನಡೆಯಿತು. ಆ ಸಮಯದಲ್ಲಿ  ಶ್ರೀಮತಿ ಪ್ರವೀಣ, ಶ್ರೀಮತಿ ಅನ್ನಪೂರ್ಣ ಹಾಗೂ ಗಿರಿ ವೆಂಕಟೇಶ  ಹಾಡುಗಳನ್ನು ಹಾಡಿ ರಂಜಿಸಿದರು.
Next Post Previous Post