ಝೈನುಲ್ ಆಬೀದ್ ಲಕ್ಷೇಶ್ವರ 'ಸಮಾಜ ರತ್ನ ಪ್ರಶಸ್ತಿಗೆ ಆಯ್ಕೆ'
ಮಂಗಳೂರು: ಕರ್ನಾಟಕ ರಾಜ್ಯ ಭಾವೈಕ್ಯತಾ ಪರಿಷತ್ ವತಿಯಿಂದ ಸಾಧಕರಿಗೆ ನೀಡುವ 'ಸಮಾಜ ರತ್ನ' ಪ್ರಶಸ್ತಿ ಗೆ ಸಮಾಜ ಸೇವಕ ಝೈನುಲ್ ಆಬೀದ್ ಲಕ್ಷೇಶ್ವರ ಆಯ್ಕೆಯಾಗಿದ್ದು.ಸೆ.14 ರಂದು ಮಂಗಳೂರಿನ ದೇರಳಕಟ್ಟೆಯಲ್ಲಿ ನಡೆಯುವ ರಾಜ್ಯ ಮಟ್ಟದ ಚುಟುಕು ಕವಿಗೋಷ್ಟಿ ಕಾರ್ಯಕ್ರಮದಲ್ಲಿ ಸ್ಪೀಕರ್ ಯು ಟಿ ಖಾದರ್ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಝೈನುಲ್ ಆಬೀದ್ ಲಕ್ಷೇಶ್ವರ ರವರು ಸಾಮಾಜಿಕ, ಧಾರ್ಮಿಕ ಶೈಕ್ಷಣಿಕ ಕ್ಷೇತ್ರದಲ್ಲಿ ನಿರಂತರ ಸಮಾಜ ಸೇವೆ ಮಾಡುವ ಮೂಲಕ ಗುರುತಿಸಿ ಕೊಂಡಿದ್ದರೆ.