ಪಾಣಾಜೆ ವಲಯ ಕಾಂಗ್ರೆಸ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ ನಿವೃತ್ತ ಯೋಧ ಪುಷ್ಪರಾಜ್ ಶೆಟ್ಟಿ ಕೋಟೆ ಅವರಿಗೆ ಸನ್ಮಾನ


ಪುತ್ತೂರು: ಪಾಣಾಜೆ ವಲಯ ಕಾಂಗ್ರೆಸ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮವು ಪುಷ್ಪರಾಜ್ ಶೆಟ್ಟಿ ಕೋಟೆ ಇವರ ಮನೆಯಲ್ಲಿ ಜರಗಿತು . ಪ್ರತಿ ಗ್ರಾಮಮಟ್ಟದಲ್ಲಿ ವಲಯ ಕಾಂಗ್ರೆಸ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಿ ಅಲ್ಲಿಯ ನಿವೃತ್ತ ಯೋಧರನ್ನು ಗುರುತಿಸಿ ಅವರನ್ನು ಗೌರವಿಸುವ ಸನ್ಮಾನಿಸುವ ಕಾರ್ಯಕ್ರಮ ಶಾಸಕರಾದ ಅಶೋಕ್ ಕುಮಾರ್ ರೈ ಯವರ ನಿರ್ದೇಶನದಂತೆ ಬ್ಲಾಕ್ ಕಾಂಗ್ರೇಸ್ ನ ಸೂಚನೆಯಂತೆ ಪಾಣಾಜೆ ವಲಯ ಕಾಂಗ್ರೆಸ್ ವತಿಯಿಂದ ನಡೆಯಿತು ಈ ಸಂದರ್ಭದಲ್ಲಿ ನಿವೃತ್ತ ಯೋಧರಾಗಿರುವ ಪುಷ್ಪರಾಜ್ ಶೆಟ್ಟಿ ಕೋಟೆ ಇವರನ್ನು ಇವರ ಮನೆಯಲ್ಲಿ ಪತ್ನಿ ಜ್ಯೋತಿ ಹಾಗೂ ತಾಯಿ ಲೀಲಾವತಿ ಯವರೊಂದಿಗೆ ಶಾಲು ಒದಿಸಿ ಹಾರ ಹಾಕಿ ಸ್ಮರಣಿಕೆ ಹಣ್ಣು ಹಂಪಲು ನೀಡಿ ಸನ್ಮಾನಿಸಲಾಯಿತು. 


ಈ ಸಂದರ್ಭದಲ್ಲಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಶ್ರೀ ಪ್ರಸಾದ್ ಪಾಣಾಜೆ ಅವರು ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ನೀಡಿ ಸರ್ವರನ್ನು ಸ್ವಾಗತಿಸಿದರು ಸನ್ಮಾನ ಸ್ವೀಕರಿಸಿದ ನಿವೃತ್ತ ಯೋಧರಾದ ಪುಷ್ಪರಾಜ್ ಶೆಟ್ಟಿ ಕೋಟೆ ಇವರು ಕಳೆದ ದಿನಗಳನ್ನು ಮೆಲುಕು ಹಾಕಿ ಕೃತಜ್ಞತೆಗಳನ್ನು ಸಲ್ಲಿಸಿದರು.


ಕಾರ್ಯಕ್ರಮದಲ್ಲಿ ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೈಮೂನತುಲ್ ಮೆಹ್ರಾ ಸದಸ್ಯರಾದ ನಾರಾಯಣ ನಾಯಕ್, ವಿಮಲಾ , 
ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಪಿ ಜಿ ಶಂಕರ್ ನಾರಾಯಣ ಭಟ್ ಪಾಣಾಜೆ ಮತ್ತು ಡಾ. ಹಾಜಿ .ಎಸ್ ಅಬೂಬಕರ್ ಆರ್ಲಪದವು, ಪಾಣಾಜೆ ವಲಯ ಕಾಂಗ್ರೇಸ್ ನಿಕಟ ಪೂರ್ವ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ರೈ ಕೆದಂಬಾಡಿ ಬೂತ್ ಅಧ್ಯಕ್ಷರುಗಳಾದ ಶ್ರೀನಿವಾಸ ಭರಣ್ಯ , ಸಲೀಂ ತೋಡುಬಳಿ ಮುಖಂಡರಾದ ಕೆ ಎ ಆಲಿ ಕಂಚಿಲ್ಕುಂಜ , ನಾರಾಯಣ ನಾಯ್ಕ ನಡುಮನೆ , ನ್ಯಾಯವಾದಿ ಕಿರಣ್ ನಡುಮನೆ ಮತ್ತಿತರರು ಉಪಸ್ಥಿತರಿದ್ದರು ವಲಯ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಭರಣ್ಯ ವಂದಿಸಿದರು
Next Post Previous Post